ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆಯ ಮುನ್ಸೂಚನೆ: ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರ್ನಾಟಕದ ಹಲವೆಡೆ ಮುಂಗಾರು ಮಳೆ ಚುರುಕುಪಡೆಯುತ್ತಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಜುಲೈ 22ರವರೆಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆ ಇದೆ.
ಹವಾಮಾನ ಇಲಾಖೆ ಪ್ರಕಾರ, ಜುಲೈ 18ರಂದು ಮುಂದೆ ಮುಂಜಾಗ್ರತಾ ಕ್ರಮವಾಗಿ ಈ ಕೆಳಗಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ: ➡️ ಬೆಂಗಳೂರು ➡️ ಕೊಡಗು ➡️ ಮೈಸೂರು ➡️ ಶಿವಮೊಗ್ಗ ➡️ ಚಿಕ್ಕಮಗಳೂರು ➡️ ಚಿತ್ರದುರ್ಗ ➡️ ಧಾರವಾಡ ➡️ ಗದಗ ➡️ ಕೊಪ್ಪಳ ➡️ ಬೆಳಗಾವಿ ➡️ ವಿಜಯಪುರ ➡️ ಕೋಲಾರ ➡️ ಚಿಕ್ಕಬಳ್ಳಾಪುರ ಸ್ಥಳೀಯವಾಗಿ ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ಘೋಷಣೆಯ ಸಾಧ್ಯತೆ ಕೂಡ ಇದೆ. ಜಿಲ್ಲಾಡಳಿತದಿಂದ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Comments

ಬೆಳಗ್ಗೆ 6 ರಿಂದಲೇ ರಸ್ತೆ ಕಾಮಗಾರಿ – ಬೆಂಗಳೂರು

ಪಾವಗಡದ ಪರಿವರ್ತನೆಗೊಂದು ಹೊಸ ಅಧ್ಯಾಯ: ಸೌರಶಕ್ತಿ ಮತ್ತು ಶುದ್ಧ ನೀರಿನ ಹೊಸ ಯುಗಕ್ಕೆ ಸಿದ್ಧತೆ!