ಅಮೃತ ಯೋಜನೆಯಡಿ ವಿಜಯಪುರ ಜಿಲ್ಲೆಗೆ ₹400 ಕೋಟಿ ಅನುದಾನ – ಸಂಸದ ಜಿಗಜಿಣಗಿ
ವಿಜಯಪುರ: ಅಮೃತ 2.0 ಯೋಜನೆಯಡಿ ವಿಜಯಪುರ ಜಿಲ್ಲೆಗೆ ಕುಡಿಯುವ ನೀರಿನ ಯೋಜನೆಗಾಗಿ ₹400 ಕೋಟಿ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಮಂಜೂರು ಮಾಡಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ. ಈಗಾಗಲೇ ₹65 ಕೋಟಿ ವೆಚ್ಚದ ಕಾಮಗಾರಿಯು ಪೂರ್ಣಗೊಂಡಿದೆ.
ಇದು 2024–25ನೇ ಸಾಲಿನ ಯೋಜನೆಯ ಭಾಗವಾಗಿದ್ದು, ಉಳಿದ ಮೊತ್ತವನ್ನು ನಿಗದಿತ ಅವಧಿಯೊಳಗೆ ಬಳಸಬೇಕಿದೆ ಎಂದು ಅವರು ಹೇಳಿದರು. ಈ ಯೋಜನೆಯಡಿ ನಗರದ ಪುರಸಭೆ ಆವರಣದಲ್ಲಿ ನಡೆದ ಭೂಮಿಪೂಜೆಯ ಸಂದರ್ಭದಲ್ಲಿ ಮಾತನಾಡಿದರು.
ಇದಲ್ಲದೆ, ₹1800 ಕೋಟಿ ವೆಚ್ಚದಲ್ಲಿ ಆರು ರಾಷ್ಟ್ರೀಯ ಹೆದ್ದಾರಿಗಳನ್ನು ವಿಜಯಪುರಕ್ಕೆ ಸಂಪರ್ಕಿಸುವ ಯೋಜನೆಯೂ ಮುಂದಿಟ್ಟಿದ್ದಾರೆ. ಅಪಘಾತ ಕಡಿಮೆ ಮಾಡುವುದು ಹಾಗೂ ವಾಹನ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ₹750 ಕೋಟಿ ವೆಚ್ಚದ 747 ಕಿ.ಮೀ ಉದ್ದದ ಪೆರಿಪೆರಿಯಲ್ ರಸ್ತೆ ಪ್ರಸ್ತಾವನೆಯನ್ನು ಕೂಡಾ ಕೇಂದ್ರಕ್ಕೆ ಸಲ್ಲಿಸಲಾಗಿದೆ.
ಶಾಸಕ ಅಶೋಕ ಮನಗೂಳಿ ಅವರು, ‘ಚುನಾವಣೆಯಲ್ಲಿ ಒಂದು ತಿಂಗಳು ರಾಜಕೀಯ ಮಾಡೋಣ, ಉಳಿದ 59 ತಿಂಗಳು ಅಭಿವೃದ್ಧಿಗೆ ಮುಂದೆ ಸಾಗೋಣ’ ಎಂಬ ನಿಲುವು ವ್ಯಕ್ತಪಡಿಸಿದರು.

Comments
Post a Comment